ನೊಯ್ಯದಿರು ಮನವೇ

ನೊಯ್ಯದಿರು ಮನವೇ
ಯಾರೇ ತುಚ್ಯವಾಗಿ ಕಂಡರೂ|
ತಳಮಳಿಸದಿರು ಜೀವವೇ
ವಿಪರೀತ ಪೃಚ್ಚರ ಮಾತಿಗೆ||

ಅವಮಾನ ಮಾಡಲೆಂದೇ
ಕಾಯುವವರು ಕೆಲವರು|
ತಲ್ಲಣಿಸದಿರು ಜೀವವೇ
ಕಾಲವೇ ಉತ್ತರಿಸುವುದು ಮೆಲ್ಲಗೆ||

ನಿನ್ನ ಒಳಮನಸನೊಮ್ಮೆ ಕೇಳು
ಇದು ನಿನಗೆ ಸರಿಯೇ ಎಂದು|
ಸರಿಯಿಲ್ಲವೆಂದರೆ ಕ್ಷಮೆಯಾಚಿಸು
ತಿದ್ದಿ ಸರಿಪಡಿಸಿಕೊ ಇಂದೇ
ಮುಂದೆ ಮರುಕಳಿಸಬಾರದೆಂದು||

ತಾಳಿದವರು ಬಾಳಿಯಾರು
ಎಂಬ ಗಾದೆ ಮಾತಿನಂತೆ
ಸಹಿಸಿಕೋ ಎಲ್ಲವನೂ|
ಕಾಲ ಬರುವುದು ನಿನಗೆ,
ಅವರಂತೆ ನೀನೂ ನಡೆದರೆ
ವ್ಯತ್ಯಾಸವೇನಿಬ್ಬರಿಗೆ||

ಶಿಲ್ಪಿ ಉಳಿಯಿಂದ ಕಡೆದಷ್ಟು
ಬಲು ಸುಂದರ ಮೂರ್ತಿಯಾಗಿ
ಪೂಜೆಗೆ ರೂಪಗೂಳ್ಳುವೆ|
ಎಲ್ಲರಿಂದ ಗೌರವ ಸ್ವೀಕರಿಸುವೆ
ಸಹಿಸಿಕೊ ಜೀವವೇ ನೀ ಅಲ್ಲಿಯವರೆಗೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಟೂ ಬಿಡಲು ಕಾರಣ
Next post ಕಣ್ಣು ಮುಚ್ಚಾಲೆ

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

cheap jordans|wholesale air max|wholesale jordans|wholesale jewelry|wholesale jerseys